Sunday, June 23, 2013

ಸ್ಫೂರ್ತಿ

ಬರೆಯಬೇಕೆನಿಸಿದೆ ನನಗೊಂದು ಕವಿತೆ
ಆದರೇನು ಮಾಡಲಿ ಪದಗಳದೇ ಕೊರತೆ !

ಅವಳ ಆ ನಗುವ ನಯನ ಛೇಡಿಸಿರಲು ಮನವನೇ
ಹೊಮ್ಮುತಿಹುದು ನವೀನ ಭಾವ ಇಂದು ಈ ಕ್ಷಣದಲೇ !

ಇಷ್ಟು ಕಾಲ ಎಲ್ಲಿ ಅವಿತಿದ್ದೆ ನೀ ನನ್ನೆದುರಿಗೆ ಬಾರದೆ ?
ದಣಿದ ಕವಿಯ ಸತಾಯಿಸಿ ಸ್ಫೂರ್ತಿಯಾಗದೆ !

ಕವಿತೆ ಮೂಡಿಬರಲು ಪದವು ಬೇಕು ಏತಕೆ?
ಮನದಲಿರುವ ಭಾವ ಚಿಮ್ಮಿ ಕವಿತೆಯಾಗಿದೆ  !

--ಅಭಿ 




No comments:

Post a Comment